Friday, 28 October 2011

**ಹುಟ್ಟು..,**

ಆಸೆ ಹುಟ್ಟಿದ್ದು
ಬದುಕಿನ ಭರವಸೆಗಳನು ಉಳಿಸಲು,


ತಾಳ್ಮೆ ಹುಟ್ಟಿದ್ದು
ಕೋಪಕ್ಕೆ ಕಡಿವಾಣ ಹಾಕಿಸಲು,

ಮೊಗ್ಗು ಹುಟ್ಟಿದ್ದು
ಹೂವಾಗಿ ಸುಗಂದವನು ಪಸರಿಸಲು, 

ಸೂರ್ಯ ಹುಟ್ಟಿದ್ದು
ಭೂಮಿಗೆ ಬೆಳಕನು ಸ್ಪರ್ಶಿಸಲು,

ಋಷಿಗಳು ಹುಟ್ಟಿದ್ದು
ಯಜ್ಞ ಯಾಗಾದಿಗಳನ್ನು ಮಾಡಿಸಲು,

ಕವಿತೆ ಹುಟ್ಟಿದ್ದು,
ಭಾವನೆಗಳನ್ನು ವರ್ಣಿಸಲು,

ಪ್ರೀತಿ ಹುಟ್ಟಿದ್ದು,
ಹೃದಯದ ಮಿಡಿತ ಹೆಚಿಸಲು,


ನೆನಪಿನ ನಾವಿಕ!!!
** Nj ಗೌಡ **

No comments:

Post a Comment